ಬೆಳಗು

– ಪಲ್ಲವಿ –

ಕರೆಯಿತು ಜಾಗೃತ ವಿಹಗಕುಲ….
ನೆರೆಯಿತು ರಾಗದಿ ಗಗನತಲ !


ಇಳೆಯನು ಬಳಸಿದ ತಾಮಸ ಜಾಲ….
ಕಳೆಯಲು ಮೂಡಿತು ಕಾಂತಿಯ ಮೂಲ !
ಕಳಕಳ ನಗುತಿದೆ ಅರಳಿದ ಕಮಲ….
ಅಳಿವೃಂದವು ಗುಂಜಾರವಲೋಲ-
ಕರೆಯಿತು ಜಾಗೃತ ವಿಹಗಕುಲ!


ಮಿಸುನಿರಸದ ತೊರೆ ಮೀರಿತು ತೀರ,
ಬಾನಿಂದಿಳಿಯಿತು ಭುವನಕೆ ಪೂರ;
ಕಣ್ಣೆದೆ ಸೆಳೆವುದು ಶುಭಶೃಂಗಾರ
ಜೀವನ ಕಾವ್ಯದ ನವರಸಸಾರ….
ಕರೆಯಿತು ಜಾಗೃತ ವಿಹಗಕುಲ !


ಎಲ್ಲಿ ಅಡಗಿತೋ ನಿದ್ರೆಯ ಭೂತ !
ಎಲ್ಲೆಡೆ ಕಾಣ್ಬಳು ಪೃಥಿವಿ ಜಾಗೃತ –
ಉಲ್ಲಸ ಹರಡಿದೆ ಉದಯದ ಗೀತ –
ಮೆಲ್ಲಗೆ ಮೊಗದೋರಿದ ದಿನನಾಧ !
ಕರೆಯಿತು ಜಾಗೃತ ವಿಹಗಕುಲ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಷ್ಟ್ರೀಯತೆಯಲ್ಲಿ ಕುರುಡಾಗದ ಕವಿ
Next post ಬೇಡತಿ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys